ಕೇಂದ್ರ ಸರ್ಕಾರವು ಭಾರತೀಯ ಕರೆನ್ಸಿ ನೋಟುಗಳಿಂದ ಮಹಾತ್ಮ ಗಾಂಧಿಯವರ ಚಿತ್ರವನ್ನು ತೆಗೆದುಹಾಕಲು ಮುಂದಾಗಿದೆ ಎಂದು ಸಿಪಿಎಂ ರಾಜ್ಯಸಭಾ ಸಂಸದ ಜಾನ್ ಬ್ರಿಟಾಸ್ ಆರೋಪಿಸಿದ್ದಾರೆ. ಕರೆನ್ಸಿ ನೋಟುಗಳಿಂದ ಗಾಂಧೀಜಿಯವರ ಚಿತ್ರವನ್ನು ತೆಗೆದುಹಾಕುವ ಕುರಿತು ಯಾವುದೇ ಪ್ರಸ್ತಾವನೆ ಇಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ಸ್ಪಷ್ಟವಾಗಿ ನಿರಾಕರಿಸಿದರೂ, ಈ ಆರೋಪ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ದೆಹಲಿಯಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಬ್ರಿಟಾಸ್, ಈ ವಿಚಾರವಾಗಿ ಈಗಾಗಲೇ ಉನ್ನತ ಮಟ್ಟದ ಸಭೆ ನಡೆದಿದ್ದು, ಕೇಂದ್ರ ಸರ್ಕಾರ ಈ ಬದಲಾವಣೆಗೆ ಮುಂದಾಗಿದೆ ಎಂದು ಹೇಳಿದ್ದಾರೆ.

ಈ ವಿಚಾರ ಇದೀಗ ರಾಜಕೀಯ ವಲಯದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದ್ದು, ವಿರೋಧ ಪಕ್ಷಗಳು ಸರ್ಕಾರದ ಉದ್ದೇಶಗಳ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿವೆ. ಇತ್ತ, ಕೇಂದ್ರ ಸರ್ಕಾರ ಅಥವಾ ಹಣಕಾಸು ಸಚಿವಾಲಯದಿಂದ ಈ ಬಗ್ಗೆ ಇನ್ನೂ ಹೊರಬೀಳಲಿದೆ.
ಮುಂದಿನ ದಿನಗಳಲ್ಲಿ ಈ ವಿಷಯದ ಕುರಿತು ಸರ್ಕಾರ ಅಥವಾ RBIಯಿಂದ ಸ್ಪಷ್ಟ ಹಾಗೂ ಅಧಿಕೃತ ಹೇಳಿಕೆ ಹೊರಬರುವ ನಿರೀಕ್ಷೆ ಇದ್ದು, ಆಗಷ್ಟೇ ಈ ಆರೋಪಗಳ ಸತ್ಯಾಸತ್ಯತೆ ಸ್ಪಷ್ಟವಾಗಲಿದೆ.
ಮಂದೆ ನೋಟ್ ನಲ್ಲಿ ಗಾಂದಿ ಫೋಟೋ ಬದಲಾಗಲು ನೋಟ್ ಬ್ಯಾನ್ ಬದಲಾಗುತ್ತೆ ಯಾವಾಗೆ ನೋಟ್ ಬ್ಯಾನ್ ಆಗುತ್ತೆ ಅಂತ ತಿಳಿಯೋಕೆ ಈ ಕೆಳಗಿನ ಬಟನ್ ಕ್ಲಿಕ್ ಮಾಡಿ
